ಕೊರೋನಾ ಸೋಂಕು ತಡೆಯಲು ರಾಜ್ಯ & ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಕರಣ.
ರಾಜ್ಯವನ್ನು ಸಂಕಷ್ಟಕ್ಕೆ ದೂಡಿರುವ ಸರ್ಕಾರದ ಕೆಲವು ವೈಫಲ್ಯಗಳನ್ನು ಈ ಸರಣಿ ಟ್ವೀಟ್ ಗಳ ಮೂಲಕ ತೆರೆದಿಡುತ್ತಿದ್ದೇನೆ.
1. Low Testing Capacity

ಮಾರ್ಚ್ ಅಧಿವೇಶನದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರ ಪ್ರಾರಂಭಿಸುವುದಾಗಿ ಹೇಳಿದ್ದ ಸರ್ಕಾರ, ಈವರೆಗೂ ಅದನ್ನು ಮಾಡಿಲ್ಲ.

ಈಗಿರುವ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಟೆಸ್ಟಿಂಗ್ ಮಾಡುವ ಸಾಮರ್ಥ್ಯವಿಲ್ಲ.

ಆದರೂ ಕೇಂದ್ರ& ರಾಜ್ಯ ಸರ್ಕಾರ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸವತ್ತ ಗಮನ ಹರಿಸಿಲ್ಲಾ.
2. Delay in Lab Results

ಕಲಬುರಗಿಯಲ್ಲಿ ಈಗಲೂ ದಿನಕ್ಕೆ ಕೇವಲ 800 ಟೆಸ್ಟ್ ನಡೆಯುತ್ತಿದೆ.

ಆದ್ದರಿಂದ ಸಾವಿರಾರು ರಿಪೋರ್ಟ್ ಗಳು ಇನ್ನೂ ಹತ್ತಾರು ದಿನಗಳಿಂದ ಬೆಂಗಳೂರಿನ ಲ್ಯಾಬ್ ಗಳಲ್ಲಿ ಬಾಕಿಯಿವೆ.

ಇದರಿಂದಾಗಿ ಸೋಂಕಿತ ಜನರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ, ಐಸೋಲೇಷನ್ ಗೆ ಒಳಪಡದೇ, ಸೋಂಕು ಮತ್ತಷ್ಟು ಹರಡಲು ಕಾರಣವಾಗಿದೆ.
3. Unreliable Test Reports

ರಾಜ್ಯದ ಸಾಕಷ್ಟು ಜನರಿಗೆ ಕೊರೋನಾ ಸೋಂಕು ಪಾಸಿಟಿವ್ & ನೆಗೆಟಿವ್ ರಿಪೋರ್ಟ್ ಬಂದಿರುವ ಉದಾಹರಣೆಗಳಿವೆ.

ಈ ಗೊಂದಲದಿಂದಾಗಿ ಸೋಂಕಿತರು ಆರಾಮಾಗಿ ಓಡಾಡಲು, ಸೋಂಕಿತರಲ್ಲದವರು ಸಾಮಾಜಿಕ ಕಳಂಕಕ್ಕೆ ಗುರಿಯಾಗಲು ಕಾರಣವಾಗಿದೆ.

ಲ್ಯಾಬ್ ರಿಪೋರ್ಟ್ ನಂಬಲಾಗದ ಪರಿಸ್ಥಿತಿ ಉಂಟಾದರೆ, ಸೋಂಕನ್ನು ನಿಯಂತ್ರಿಸುವುದೇಗೆ?
4. Fatigue among Officers

ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿ ಸೋಂಕಿತರ ನಡುವೆ ಕಳೆದ 4 ತಿಂಗಳಿಂದ ರಜೆಯಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕ್ವಾರಂಟೈನ್ & ಚಿಕಿತ್ಸೆಯ ಕುರಿತು 3 ತಿಂಗಳಿನಿಂದ ಸರ್ಕಾರ ದಿನಕ್ಕೊಂದು ನಿಯಮ ಮಾಡುತ್ತಿದೆ.

ಇದು ಫ್ರಂಟ್ ಲೈನ್ ಕೊರೋನಾ ವಾರಿಯರ್ಸ್ & ಅಧಿಕಾರಿಗಳು ಬಳಲಿಕೆಗೆ ಕಾರಣವಾಗಿದೆ.
5. Lack of Medical Facilities

ಬೆಂಗಳೂರಿನಲ್ಲೇ ಆಂಬುಲೆನ್ಸ್ ಕೊರತೆಯಿಂದಾಗಿ ಜನರು ಪರದಾಡುತ್ತಿದ್ದು, ಬೀದಿಯಲ್ಲಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಅಡ್ಮಿಟ್ ಮಾಡಲು ಸೂಕ್ತ ಬೆಡ್ ವ್ಯವಸ್ಥೆ ಹಾಗೂ ವೈದ್ಯಕೀಯ ಉಪಕರಣಗಳ ಕೊರತೆ ಎದ್ದು ಕಾಣುತ್ತಿದೆ.
(cont...)
ಖಾಸಗಿ & ಸರ್ಕಾರಿ ಆಸ್ಪತ್ರೆಗಳಲ್ಲಿ ಎಷ್ಟು ಬೆಡ್ ಖಾಲಿ ಇದೆ ಎನ್ನುವ ರಿಯಲ್ ಟೈಮ್ ಮಾಹಿತಿ ಈವರೆಗೂ ಸರ್ಕಾರ & ಸಚಿವರ ಬಳಿಯೇ ಇಲ್ಲದಾಗಿದೆ.

ಇದರಿಂದಾಗಿ ಸೋಂಕಿತರು 10-15 ಆಸ್ಪತ್ರೆ ಸುತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜಧಾನಿಯಲ್ಲೇ ಈ ಪರಿಸ್ಥಿತಿ ಇದ್ದರೆ, ಇತರ ಜಿಲ್ಲಾ, ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನರ ಪಾಡೇನು?
6. Treatment Denial at Pvt Hospitals

ಚಿಕಿತ್ಸಾ ದರ ನಿಗದಿ ಕುರಿತು ಖಾಸಗಿ ಆಸ್ಪತ್ರೆಗಳ & ಸರ್ಕಾರದ ನಡುವಿನ ಸಮನ್ವಯದ ಕೊರತೆಯಿದೆ,

ಇದರಿಂದಾಗಿ ಖಾಸಗಿ ಆಸ್ಪತ್ರೆಗಳು ಸೋಂಕಿತರಿಗೆ
>ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿವೆ/
>ಹೆಚ್ಚಿನ ದರ ವಸೂಲಿಗೆ ಇಳಿದಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಆದೇಶದ ಕಿಮ್ಮತ್ತೇ ಇಲ್ಲದಾಗಿದೆ.
7. No Protection to Corona Warriors

ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿರುವ ವೈದ್ಯರು, ಪೊಲೀಸ್ ಸಿಬ್ಬಂದಿ & ಆಶಾ ಕಾರ್ಯಕರ್ತೆಯರಿಗೆ ಅಗತ್ಯ ರಕ್ಷಣಾ ಸಾಮಾಗ್ರಿಗಳನ್ನು ಪೂರೈಸುವಲ್ಲಿಯೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.

ಪೂರೈಸಿರುವ ಸಾಮಾಗ್ರಿಗಳೂ ಕೂಡ ಕಳಪೆ ಗುಣಮಟ್ಟದ್ದಾಗಿದೆ.
(cont...)
> KIMSಗೆ ಪೂರೈಸಿದ ಕಳಪೆ PPE ಕಿಟ್ ನಿಂದಾಗಿ ಅಲ್ಲಿನ ವೈದ್ಯರಿಗೆ ಸೋಂಕು ತಗುಲಿದೆ.

> ಕಲಬುರಗಿ ಏರ್ ಪೋರ್ಟ್ ನಲ್ಲಿ 65 ಸಿಬ್ಬಂದಿಗೆ ಕೇವಲ 15 ಫೇಸ್ ಶೀಲ್ಡ್ ಪೂರೈಸಿದ್ದಾರೆ.

> ತಳಮಟ್ಟದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಕಳಪೆ ಸುರಕ್ಷಾ ಸಾಮಗ್ರಿ ನೀಡಲಾಗುತ್ತಿದೆ.

ಇದನ್ನು ಕಂಡು ಕೊರೋನಾ ವಾರಿಯರ್ಸ್ ಗೆ ನಡುಕ ಹುಟ್ಟಿದೆ.
8. Poor Maintenance of Quarantine Centres

ಕಲಬುರಗಿಯ ಫರ್ತಾಬಾದ್ & ಬೆಂಗಳೂರಿನ ಪೊಲೀಸ್ ಸಿಬ್ಬಂದಿ ತಾವಿರುವ ಕ್ವಾರಂಟೈನ್ ಕೇಂದ್ರಗಳ ಅಸಹ್ಯಕರ ಪರಿಸ್ಥಿತಿ & ನೀಡುತ್ತಿರುವ ಕಳಪೆ ಊಟದ ಸಾಕ್ಷ್ಯ ಬಿಡುಗಡೆ ಮಾಡಿದ್ದರು.

ಜೊತೆಗೆ ಬೆಂಗಳೂರಿನಲ್ಲಿ ಲಂಚ ಕೊಟ್ಟು ಕ್ವಾರಂಟೈನ್ ಕೇಂದ್ರಗಳಿಂದ ಜನ ತಪ್ಪಿಸಿಕೊಂಡು ಹೋಗಿದ್ದರು.
(cont...)
9. Shortage of Medical Staff

ಕೊರೋನಾ ಗಂಭೀರ ಸ್ವರೂಪ ತಾಳುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು ಹೆಚ್ಚಿನ ಆರೋಗ್ಯ ಸಿಬ್ಬಂದಿಗಳನ್ನು ತುರ್ತಾಗಿ ನೇಮಕ ಮಾಡಿಕೊಂಡಿವೆ.

ಆದರೆ, ನಮ್ಮ ರಾಜ್ಯದ 50% ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆಯಿದ್ದರೂ, ಯಾವುದೇ ಹೊಸ ನೇಮಕಾತಿಗೆ ಸರ್ಕಾರ ಮುಂದಾಗಿಲ್ಲ.

ಇದು ಆಶ್ಚರ್ಯಕರ ಹಾಗೂ ಆಘಾತಕಾರಿ.
10. Unprepared Government

ಲಾಕ್ ಡೌನ್ ಸಮಯದಲ್ಲಿ ಈ ಸರ್ಕಾರ ನಿದ್ದೆ ಮಾಡುತ್ತಾ

> ಆಸ್ಪತ್ರೆಗಳ ಬೆಡ್ ಸಾಮರ್ಥ್ಯ ಹೆಚ್ಚಿಸದೇ,
> ಆಂಬುಲೆನ್ಸ್ ಖರೀದಿ ಮಾಡದೇ,
> ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳದೇ,
ಈಗ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸಕ್ಕೆ ನಿಂತು ದಿನಕ್ಕೊಂದು ನಿಯಮ ತಂದು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದೆ.
11. No Dignified Burial

ಬಳ್ಳಾರಿ, ದಾವಣಗೆರೆ, ಹೊಸಪೇಟೆ ಸೇರಿದಂತೆ ರಾಜ್ಯದ ಹಲವೆಡೆ ಕೊರೋನಾದಿಂದ ಮೃತಪಟ್ಟವರ ಶವಗಳನ್ನು ಅಮಾನವೀಯ ರೀತಿಯಲ್ಲಿ ಗುಂಡಿಗೆ ಎಸೆಯಲಾಗಿತ್ತು.

ಆರೋಗ್ಯ ಇಲಾಖೆಯ ನಿಯಮಾನುಸಾರ ಗೌರವಯುತ ಅಂತ್ಯಸಂಸ್ಕಾರ ನಡೆಸಲೂ ಈ ಸರ್ಕಾರದಿಂದ ಸಾಧ್ಯವಾಗದಿರುವುದು ದುರ್ದೈವದ ಸಂಗತಿ.
12. Confused Govt

> ರಾಜ್ಯದಲ್ಲಿ ಕೆಲವು ಕೇಸ್ ಇರುವಾಗ ಅವೈಜ್ಞಾನಿಕ ಲಾಕ್ ಡೌನ್ ಮಾಡಿ,
> ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಲಾಠಿ ಬೀಸಿ,
> ವಲಸಿಗರನ್ನು ನಿರ್ಗತಿಕರನ್ನಾಗಿ ಮಾಡಿ ಭಿಕ್ಷುಕರನ್ನಾಗಿಸಿದ್ದ ಈ ಸರ್ಕಾರ, ಈಗ ಕೇಸ್ 20,000 ದಾಟಿದ್ದರೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡುತ್ತಲೇ ಇಲ್ಲಾ.
ಕೇಂದ್ರ ಸರ್ಕಾರ ದೀಪ ಹಚ್ಚಿ, ತಟ್ಟೆ ಬಡಿಯಿರೆಂದು ಉಚಿತ ಸಲಹೆ ನೀಡಿದ್ದು ಬಿಟ್ಟರೆ ರಾಜ್ಯಕ್ಕೆ ಯಾವುದೇ ಸಹಾಯ ಮಾಡಿಲ್ಲ.
ಇನ್ನು ರಾಜ್ಯ ಸರ್ಕಾರ ಸಾಂಕ್ರಾಮಿಕದ ಮಧ್ಯದಲ್ಲಿಯೂ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ.

ವಿಧಾನ ಸೌಧದ ಮೇಲಿರುವ ಬರಹದಂತೆ "ಸರ್ಕಾರದ ಕೆಲಸ ದೇವರ ಕೆಲಸ"ವೆಂದು ಎಲ್ಲವನ್ನು ದೇವರ ಮೇಲೇ ಹಾಕಿ ಈ ಸರ್ಕಾರ ಕೈ ಚೆಲ್ಲಿದೆ
You can follow @PriyankKharge.
Tip: mention @twtextapp on a Twitter thread with the keyword “unroll” to get a link to it.

Latest Threads Unrolled:

By continuing to use the site, you are consenting to the use of cookies as explained in our Cookie Policy to improve your experience.